ಜ್ಞಾನ

ಸದ್ದಿಲ್ಲದೇ ಅರಳಿದ ಹೂಗಳು
ಮರದ ತುಂಬ ಹರಡಿ ಹಾಸಿತು
ಜೀವಗಂಧ ಝೇಂಕಾರದಲಿ ದುಂಬಿ ತಂಡ
ಗಾಳಿ ಬೀಸಿತು ತಂಪಾಗಿ ಮರದಲಿ
ಕುಳಿತ ಹಕ್ಕಿಗಳು ಉಲಿದವು ಇಂಪಾಗಿ.

ಗೂಡು ಕಟ್ಟುವ ನೆರಳು ಮಣ್ಣ
ಕಣಕಣದಲಿ ಹರಡಿ ಆಳಕ್ಕಿಳಿದ ಕಣ್ಣು
ತಾಯಿಬೇರು ನೂರು ರೂಪಕಗಳು
ಹುಟ್ಟಿದ ಜೀವ ಜಾಲ ಮೈ ಮನಸ್ಸಿನಲಿ
ಉಳಿದ ಮೌನ ಪ್ರತಿಧ್ವನಿ ರಿಂಗಣ.

ಆಳಕ್ಕೆ ಇಳಿದ ಭಾವಬಂಧ
ಮೇಲಕ್ಕೆ ಹಬ್ಬಿದ ಚಿಗುರಬಳ್ಳಿ
ಬಿಸಿಲು ಮಳೆ ಬೆಳದಿಂಗಳು
ಬೆಳೆಯುತ್ತ ಒಂದರೊಳಗೆ ಮತ್ತೊಂದು
ಎಂದೂ ಬರಿದಾಗದ ಕಡಲ ತಟ.

ಈ ಬೆಳವಣಿಗೆಯ ಬೆಳೆಯ ಇಳೆ
ಕೊನೆಯೆಂಬುದಿಲ್ಲ ಕ್ರಿಯೆ ಎದೆಯೊಳಗೆ
ಸೂರ್ಯ ಮುಳುಗಿದ ಮೇಲೆ ಬೆಳಕ ಕೊಡುವ ಚಂದ್ರ
ಕಣ್ಣಕಾಂತಿಯಲಿ ತೇಲಿದ ಗೌತಮನ ಬೆಳಕು
ಒಳಗೊಳಗೆ ಉಳಿದ ಪೂರ್ಣ ಪ್ರಜ್ಞೆ ಜ್ಞಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ
Next post ಅರಮನೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys